Home Mangalorean News Kannada News ಹೆಮ್ಮಾಡಿ ಡೈರಿ ಸರ್ಕಲ್ ಬಳಿ ಅಪಘಾತ: ಬಸ್ ಚಾಲಕ ಸಾವು

ಹೆಮ್ಮಾಡಿ ಡೈರಿ ಸರ್ಕಲ್ ಬಳಿ ಅಪಘಾತ: ಬಸ್ ಚಾಲಕ ಸಾವು

Spread the love

ಹೆಮ್ಮಾಡಿ ಡೈರಿ ಸರ್ಕಲ್ ಬಳಿ ಅಪಘಾತ: ಬಸ್ ಚಾಲಕ ಸಾವು

ಕುಂದಾಪುರ: ಹೆಮ್ಮಾಡಿ ಹಾಲು ಡೈರಿ ಸರ್ಕಲ್ ಬಳಿ ಸಂಭವಿಸಿದ ಕಾರು ಮತ್ತು ಬೈಕ್ ಅಪಘಾತದಲ್ಲಿ ಖಾಸಗಿ ಬಸ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ವಂಡ್ಸೆ ಉದ್ದಿನಬೆಟ್ಟು ನಿವಾಸಿ ಮಹಾಬಲ ಪೂಜಾರಿ (52) ಸಾವನ್ನಪ್ಪಿದ್ದ ದುರ್ದೈವಿ.

ಖಾಸಗಿ ಬಸ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಾಬಲ‌ ಪೂಜಾರಿ ಅವರು ಸಂಜೆ ಕುಂದಾಪುರದಲ್ಲಿ ಬಸ್ ನಿಲ್ಲಿಸಿ ಬೈಕ್ ನಲ್ಲಿ ಪತ್ನಿ ಮನೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಡೈರಿ‌ ಸರ್ಕಲ್‌ ಮೂಲಕ ತೊಪ್ಲುವಿಗೆ ತಿರುವು ತೆಗೆದುಕೊಳ್ಳುತ್ತಿದ್ದಾಗ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಕಾರು ನೇರವಾಗಿ ಬೈಕ್ ಗೆ ಢಿಕ್ಕಿಯಾಗಿದೆ.

ಢಿಕ್ಕಿಯ ರಭಸಕ್ಕೆ ಮಹಾಬಲ‌ ಪೂಜಾರಿಯವರ ಕಾಲು,‌ ತಲೆ‌ಗೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ‌.

ಕುಂದಾಪುರ‌ ಸಂಚಾರಿ‌ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.


Spread the love

Exit mobile version