A.S.I ಐತಪ್ಪ ಅವರನ್ನು ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯ ಭೇಟಿ

Spread the love

A.S.I ಐತಪ್ಪ ಅವರನ್ನು  ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಭೇಟಿ

ಮಂಗಳೂರಿನ ಲೇಡಿಲ್ ವೃತ್ತದ ಬಳಿ ಎ.5 ರಂದು ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಅಮೃತ ಸಂಜೀವಿನಿ ಇದರ ಸದಸ್ಯರಾದ ವಿನ್ಯಾಸ್ ಕಾವೂರು ಇವರ ತಂದೆ ಉರ್ವ ಪೋಲಿಸ್ ಠಾಣೆಯ A.S.I ಐತಪ್ಪ ಅವರನ್ನು ಅಮೃತಸಂಜೀವಿನಿಲ ಇದರ ಮಾರ್ಗದರ್ಶಕರಾದ ವಜ್ರದೇಹಿ ಮಠದ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಯವರ ಜೊತೆಗೆ ಅಮೃತಸಂಜೀವಿನಿ ಕಾರ್ಯವಿಭಾಗ ಹಾಗೂ ಮಹಿಳಾ ವಿಭಾಗದ ಸದಸ್ಯರು ಭೇಟಿಯಾಗಿ ಸಾಂತ್ವನ ಹೇಳಿದರು.

ಸಮಾಜದ ರಕ್ಷಣೆ ಮಾಡಬೇಕಾದ ಅರಕ್ಷಕರಿಗೇ ರಕ್ಷಣೆ ಇಲ್ಲದಿರುವುದು ತುಂಬಾ ನೋವಿನ ಸಂಗತಿ, ಮಂಗಳೂರಿನ ಪೋಲಿಸ್ ಕಮಿಷನರ್ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಶಸ್ತ್ರಾಸ್ತ್ರ ನೀಡುವ ಬಗ್ಗೆ ಹೊರಡಿಸಿದ ಆದೇಶ ನಿಜವಾಗಿಯೂ ಸ್ವಾಗತಾರ್ಹ ಎಂದು ವಜ್ರದೇಹಿ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು.


Spread the love