ಕಲ್ಮಾಡಿಯಲ್ಲಿ ಸರಣಿ ಅಪಘಾತ : ಮೂರು ಬೈಕ್ ಗಳಿಗೆ ಡಿಕ್ಕೆ ಹೊಡೆದ ಕಾರು, ಸವಾರರಿಗೆ ಗಂಭೀರ ಗಾಯ

Spread the love

ಕಲ್ಮಾಡಿಯಲ್ಲಿ ಸರಣಿ ಅಪಘಾತ : ಮೂರು ಬೈಕ್ ಗಳಿಗೆ ಡಿಕ್ಕೆ ಹೊಡೆದ ಕಾರು, ಸವಾರರಿಗೆ ಗಂಭೀರ ಗಾಯ

ಉಡುಪಿ: ನಿಯಂತ್ರಣ ತಪ್ಪಿದ ಕಾರೊಂದು ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದ ಘಟನೆ ಮಲ್ಪೆ ಸಮೀಪದ ಕಲ್ಮಾಡಿ ಜಂಕ್ಷನ್ ಬಳಿ ಮಂಗಳವಾರ ಸಂಭವಿಸಿದೆ

ಉಡುಪಿ ಕಡೆಯಿಂದ ಮಲ್ಪೆಗೆ ಬರುತ್ತಿರುವ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮೂರು ಬೈಕ್ ಗಳಿಗೆ ಡಿಕ್ಕಿ ಹೊಡೆದಿದ್ದು, ಮೂರು ಬೈಕ್ ಸವಾರರು ಗಂಭಿರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಾಯಗೊಂಡ ಬೈಕ್ ಸವಾರರನ್ನು ಕಾನಂಗಿಯ ಪ್ರಶಾಂತ್, ದಯಾನಂದ ಹಾಗೂ ಸುರೇಶ್ ಎಂದು ತಿಳಿದು ಬಂದಿದ್ದು, ಕಾರು ಚಾಲಕ ಸುಕೇಶ್ ಕುಂದಾಪುರ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ನಗರ ಸಭೆ ಸದಸ್ಯ ಸುಂದರ್ ಕಲ್ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಲ್ಪೆ ಪೊಲೀಸರು ಸ್ಥಳಕ್ಕೆ ಕೂಡಲೇ ಬಂದು ಪರಿಶೀಲನೆ ನಡೆಸುತ್ತಿದ್ದಾರೆ.ಸರಣಿ ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿತ್ರ ಕೃಪೆ: ಪ್ರವೀಣ್ ಸ್ಯಾನಿ ಡಿಜಿಟಲ್ಸ್ ಕಲ್ಮಾಡಿ


Spread the love