ಕುಂಜಿಬೆಟ್ಟು ವಾರ್ಡ್ ಸುಮಾರು 1 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ 

Spread the love

ಕುಂಜಿಬೆಟ್ಟು ವಾರ್ಡ್ ಸುಮಾರು 1 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ 

ಉಡುಪಿ: ಕುಂಜಿಬೆಟ್ಟು ವಾರ್ಡಿನಲ್ಲಿ ನಗರಸಭಾ ನಿಧಿಯಿಂದ ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ವಿವಿಧ ಕಾಮಗಾರಿಗಳನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಶ್ ಪಾಲ್ ಸುವರ್ಣ ಕುಂಜಿಬೆಟ್ಟು ವಾರ್ಡಿನ ಕಟ್ಟೆ ಆಚಾರ್ಯ ಮಾರ್ಗ ಮರು ಡಾಮರೀಕರಣಕ್ಕೇ 19 ಲಕ್ಷ ಅನುದಾನ ಒದಗಿಸಿದ್ದು ಶೀಘ್ರದಲ್ಲಿಯೇ ಕಾಮಗಾರಿ ಆರಂಭ ಗೊಳ್ಳಲಿದ್ದು, ವಾರ್ಡಿನ ಸಮಗ್ರ ಅಭಿವೃದ್ಧಿಗೆ ಶಾಸಕರ ನೆಲೆಯಲ್ಲಿ ಸಂಪೂರ್ಣ ಸಹಕಾರದ ಆಶಯ ವ್ಯಕ್ತಪಡಿಸಿದರು.

ನಗರ ಸಭಾ ಸದಸ್ಯರಾದ ಗಿರೀಶ್ ಅಂಚನ್,  ರಜನಿ ಹೆಬ್ಬಾರ್, ಪಕ್ಷದ ಪ್ರಮುಖರಾದ  ವೀಣಾ ಶೆಟ್ಟಿ, ಹರೀಶ್ ಶೇರಿಗಾರ್ ಬೈಲಕೆರೆ,  ಮಂಜುನಾಥ ಹೆಬ್ಬಾರ್, ಸ್ಥಳೀಯರಾದ ಸುಪ್ರೀತ್ ಭಂಡಾರಿ, ಶರತ್ ಮಡಿವಾಳ,   ಜಯಂತ್ ಕುಂದರ್, ವಿನಾಯಕ ಶೇಟ್, ಇಸ್ಮಾಯಿಲ್, ಸುಲೇಮಾನ್, ದೇವು ಪೂಜಾರಿ,  ಬೇಬಿ ಪುತ್ರನ್, ಶ್ರೀ ಬಾಲಕೃಷ್ಣ ನಾಯಕ್, ಶ್ರೀಧರ ಪೈ,  ವಿದ್ಯಾ ಶ್ಯಾಮ ಸುಂದರ್, ಡಾ ಸತೀಶ್ ರಾವ್,  ಸೀತಾ ಪೂಜಾರಿ, ಪ್ರದೀಪ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love