ಪುತ್ತೂರು: ವಿದ್ಯುತ್ ಆಘಾತಕ್ಕೆ ಎಲೆಕ್ಟ್ರೀಶಯನ್ ಬಲಿ

Spread the love

ಪುತ್ತೂರು: ವಿದ್ಯುತ್ ಆಘಾತಕ್ಕೆ ಎಲೆಕ್ಟ್ರೀಶಯನ್ ಬಲಿ

ಮಂಗಳೂರು: ವಿದ್ಯುತ್ ಆಘಾತಕ್ಕೆ ಒಳಗಾಗಿ ಎಲೆಕ್ಟ್ರೀಷಿಯನ್ ಒಬ್ಬರು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.

ಮೃತರನ್ನು ಪುತ್ತೂರು ಬೋಳ್ವಾರ್ ನಿವಾಸಿ ಗಣೇಶ್ ಗೌಡ (36) ಎಂದು ಗುರುತಿಸಲಾಗಿದೆ. ಮೃತರು ಬೋಳ್ವಾರ್ ನಲ್ಲಿ ಎಲೆಕ್ಟ್ರೀಶಿಯನ್ ಅಂಗಡಿಯನ್ನು ಹೊಂದಿದ್ದರು.

ಗಣೇಶ್ ಅವರು ಶುಕ್ರವಾರ ರಾತ್ರಿ ಮನೆಯಲ್ಲಿ ಬಟ್ಟೆಗೆ ಇಸ್ತ್ರೀ ಹಾಕುತ್ತಿದ್ದ ವೇಳೆ ವಿದ್ಯುತ್ ಶಾಕ್ ಗೆ ಬಲಿಯಾಗಿದ್ದು, ಮೃತರು ತಾಯಿ, ಸಹೋದರರರು, ಪತ್ನಿ ಮತ್ತು ಒಂದು ಗಂಡು ಮಗುವನ್ನು ಅಗಲಿದ್ದಾರೆ.


Spread the love