ಬಸ್ರೂರು ಮೂರುಕೈ ಜಂಕ್ಷನ್ ಹೆದ್ದಾರಿ ಅಗಲೀಕರಣ- ಸಂಚಾರ ಬದಲಾವಣೆ

Spread the love

ಬಸ್ರೂರು ಮೂರುಕೈ ಜಂಕ್ಷನ್ ಹೆದ್ದಾರಿ ಅಗಲೀಕರಣ- ಸಂಚಾರ ಬದಲಾವಣೆ

ಉಡುಪಿ : ಕುಂದಾಪುರ ಬಸ್ರೂರು ಮೂರುಕೈ ಜಂಕ್ಷನ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕುರಿತು ವೈಕ್ಯುಲರ್ ಅಂಡರ್ ಪಾಸ್ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಎಲ್ಲಾ ವಾಹನ ಚಾಲಕರು ಸರ್ವಿಸ್ ರಸ್ತೆ ಬಳಸಬೇಕಾಗಿರುತ್ತದೆ.

ಕುಂದಾಪುರದಿಂದ ಉಡುಪಿ ಮಂಗಳೂರು ಮಾರ್ಗವಾಗಿ ಹೋಗುವವರು, ಬೊಬ್ಬರ್ಯನ ಕಟ್ಟೆ ಬಳಿ ಎಡಕ್ಕೆ ತಿರುಗಿ ಸರ್ವೀಸ್ ರಸ್ತೆಯ ಮೂಲಕ ವಿನಾಯಕ ಥಿಯೇಟರ್ ಬಳಿ ಬಲಕ್ಕೆ ತಿರುಗಿ ಹೆದ್ದಾರಿಯನ್ನು ತಲುಪಬಹುದು, ಜೊತೆಗೆ ಮೂರುಕೈ ಮುಖಾಂತರ ಕುಂದಾಪುರ ಕಡೆಗೆ ಹೋಗುವವರು ಎಡಕ್ಕೆ ತಿರುಗಿ ಯು ಟನ್ ್ ಬಳಸಬೇಕಾಗುತ್ತದೆ.

ಉಡುಪಿಯಿಂದ ಬೈಂದೂರು ಕಡೆಗೆ ಹೋಗುವವರು ವಿನಾಯಕ ಥಿಯೇಟರ್ ಬಳಿ ಎಡಕ್ಕೆ ತಿರುಗಿ, ಸರ್ವಿಸ್ ರಸ್ತೆ ಬಳಸಿ, ಶಾಸ್ರ್ತೀ ವೃತ್ತ ತಲುಪಬೇಕಾಗಿರುತ್ತದೆ ಜೊತೆಗೆ ಉಡುಪಿಯಿಂದ ಸಿದ್ದಾಪುರ ಶಿವಮೊಗ್ಗ ಹೋಗುವವರು ಬೊಬ್ಬರ್ಯನ ಕಟ್ಟೆ ಬಳಿ ಯು ಟನ್ ್ ಬಳಸಬೇಕಾಗುತ್ತದೆ. ಸರ್ವಿಸ್ ರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ ಎಂದು ಕುಂದಾಪುರ ವಿಭಾಗದ ಸಹಾಯಕ ಆಯುಕ್ತ ಭೂ ಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love