ಮತ್ತೊಮ್ಮೆ ಸೇವಾ ಕಾರ್ಯಕ್ಕೆ ಜನಮನ್ನಣೆ ಪಡೆದ ಬಸ್ ಚಾಲಕ ನಿರ್ವಾಹಕರು ಹಾಗೂ ಸಮಯ ಪರಿಪಾಲಕರು

Spread the love

ಮತ್ತೊಮ್ಮೆ ಸೇವಾ ಕಾರ್ಯಕ್ಕೆ ಜನಮನ್ನಣೆ ಪಡೆದ ಬಸ್ ಚಾಲಕ ನಿರ್ವಾಹಕರು ಹಾಗೂ ಸಮಯ ಪರಿಪಾಲಕರು

ಮಂಗಳೂರು: ರೂಟ್ ನಂಬರ್ 13 bಕುಳೂರು ಕಾವೂರು ಬಸ್ ಚಾಲಕ ನಿರ್ವಾಹಕರು ಹಾಗೂ ಸಮಯ ಪರಿಪಾಲಕರು ವಾಟ್ಸ್ ಅಪ್ ಗ್ರೂಪ್ ಮಾಡಿಕೊಂಡಿದ್ದು ಸಮಾಜ ಮುಖಿ ಕಾರ್ಯದಲ್ಲಿ ತೊಡಗಿದ್ದು ಈ ಬಾರಿ ಹದಗೆಟ್ಟ ರಸ್ತೆಯನ್ನ ಶ್ರಮದಾನ ಮಾಡುವ ಮೂಲಕ ಮತ್ತೆ ಸುದ್ದಿ ಮಾಡಿದ್ದಾರೆ.

ರಸ್ತೆ ಗುಂಡಿ ಮುಚ್ಚಲು ಜಾಗೃತಿಗಾಗಿ ,ಹದಗೆಟ್ಟ ರಸ್ತೆ ದುರಸ್ತಿ ಗಾಗಿ ರಸ್ತೆ ಗುಂಡಿ ಸುತ್ತಲು ಕಾನ್ಕ್ರೆಟ್ ನಿಂದ ಮುಚ್ಚಿ ಜನಪ್ರತಿನಿಧಿಗಳು,ಸರಕಾರ ದ ಗಮನ ಸೆಳೆಯಲು ಕುಳೂರ್ ಕಾವುರ್ ರೂಟಿನ ಚಾಲಕರು ನಿರ್ವಾಹಕರು ಸಮಯ ಪರಿಪಾಲಕರು ಇಂದು ಶ್ರಮದಾನ ಮಾಡಿದರು .

ಹಿಂದಿನಿಂದಲೂ ತನ್ನ ದೈನಂದಿನ ಕೆಲಸದ ಒತ್ತಡದ ನಡುವೆ ಸಾಮಾಜಿಕ ಕೆಲಸಕ್ಕೆ ಮನ್ನಣೆ ನೀಡಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಸ್ ಶ್ರಮಿಕರ ಮಾನವೀಯ ಗುಣಗಳಿಗೆ ಕೈಗನ್ನಡಿ ಯಾದಂತಿದೆ, ಈ ಬಾರಿ ವಿಪರೀತ ಮಳೆ ಇಂದ ಜಿಲ್ಲೆಯದಾಂತ್ಯ ಪ್ರಮುಖ ರಸ್ತೆ ಹಾಳಾಗಿದ್ದು ಇಂದಿಗೂ ವಾಹನ ಸವಾರರು ರಸ್ತೆಯಲ್ಲಿ ಪರದಾಡುತ್ತಿದ್ದಾರೆ


Spread the love
Subscribe
Notify of

0 Comments
Inline Feedbacks
View all comments