ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ 4ನೇ ಬಾರಿ ಯಶ್ಪಾಲ್ ಸುವರ್ಣ ಪುನರಾಯ್ಕೆ

Spread the love

ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ 4ನೇ ಬಾರಿ ಯಶ್ಪಾಲ್ ಸುವರ್ಣ ಪುನರಾಯ್ಕೆ

ಉಡುಪಿ: ಅವಿಭಜಿತದಕ್ಷಿಣಕನ್ನಡಜಿಲ್ಲೆಯಲ್ಲಿ ಸಹಕಾರಿರಂಗದ ಹಿರಿಯ ಸಂಸ್ಥೆಯಾದದ.ಕ ಮತ್ತುಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನಿಗೆ ಸತತ 4ನೇ ಅವಧಿಗೆ  ಯಶ್ಪಾಲ್ ಎ ಸುವರ್ಣರವರು ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ, ಪುರುಷೋತ್ತಮ್ಅಮೀನ್ ಉಳ್ಳಾಲ ಇವರು ಉಪಾಧ್ಯಕ್ಷರಾಗಿ ಪುನರಾಯ್ಕೆಗೊಂಡಿರುತ್ತಾರೆ.

ದಿನಾಂಕ 03.04.2019 ರಂದು ಬುಧವಾರ ಫೆಡರೇಶನಿನ ಆಡಳಿತ ಮಂಡಳಿಯ ಸಭೆಯಲ್ಲಿಚುನಾವಣಾಅಧಿಕಾರಿ ಮಹೇಶ್ವರಪ್ಪ, ಲೆಕ್ಕಪರಿಶೋಧನಾಉಪನಿರ್ದೇಶಕರು ಮಂಗಳೂರು ಇವರುಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.

ಯಶ್ಪಾಲ್ ಸುವರ್ಣ 2009 ರಲ್ಲಿ ಫೆಡರೇಶನಿನ ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ ಆಡಳಿತ ಮಂಡಳಿಯ ಸದಸ್ಯರು ಮತ್ತು ಸರ್ವಸದಸ್ಯರ ಸಹಕಾರದಿಂದತಮ್ಮ ವೈಯಕ್ತಿಕ ವರ್ಚಸ್ಸನ್ನು ಬಳಸಿ ಫೆಡರೇಶನಿನ ಪ್ರಮುಖ ವ್ಯವಹಾರಗಳಾದ ಸಿಗಡಿ ಮಾರಾಟ, ಡೀಸಿಲ್ ಮಾರಾಟ, ಮೀನುಗಾರಿಕಾ ಸಲಕರಣೆಗಳ ಮಾರಾಟ ಹಾಗೂ ನೂತನ ಬ್ಯಾಂಕಿಂಗ್ ವಿಭಾಗವನ್ನು ಆರಂಭಿಸಿ ರಾಜ್ಯ ಸರಕಾರದ ಮತ್ತುಕೇಂದ್ರ ಸರಕಾರದ ಹಲವಾರು ಯೋಜನೆಗಳನ್ನು ಸಂಸ್ಥೆಗೆ ಪಡೆದು ಅನುಷ್ಠಾನಗೊಳಿಸಿ 46 ಕೋಟಿಗಳಷ್ಟು ಇದ್ದ ಸಂಸ್ಥೆಯ ವ್ಯವಹಾರವನ್ನು ಸುಮಾರು 250 ಕೋಟಿ ಮೀರುವಂತೆ ಮಾಡಿದಕೀರ್ತಿ ಶ್ರೀ ಯಶ್ಪಾಲ್ ಸುವರ್ಣ ನೇತೃತ್ವದ ಆಡಳಿತ ಮಂಡಳಿಗೆ ಸಲ್ಲುತ್ತದೆ. ಇವರಅಧ್ಯಕ್ಷಿಯಅವಧಿಯಲ್ಲಿಉತ್ತಮಗುಣಮಟ್ಟದ ಸೇವೆಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಮಟ್ಟದಹಲವಾರು ಪ್ರಶಸ್ತಿ ಹಾಗೂ ಇಂಡಿಯನ್ಆಯಿಲ್ ಕಂಪೆನಿಯಿಂದ ನೀಡಲ್ಪಡುವ ಪ್ರಶಸ್ತಿಗಳು ಅರಸಿ ಬಂದಿದೆ ಮತ್ತು ಸಂಸ್ಥೆಯ ಸಿಬ್ಬಂದಿಗಳ ವೇತನವನ್ನು ಸರಕಾರಿ ವೇತನದ ಸಮಾನ ಮಟ್ಟಕ್ಕೆ ಏರಿಸಿ, ಸಿಬ್ಬಂದಿಗಳಿಗೆ ಹಲವು ಸೌಲಭ್ಯಗಳನ್ನು ಒದಗಿಸಿದ್ದಾರೆ.

ಫೆಡರೇಶನಿನ ಎಲ್ಲಾ ಶಾಖೆಗಳು ಗಣಕೀಕರಣಗೊಂಡುಅಂತರ್ಜಾಲ ಹೊಂದಿ ಬ್ಯಾಂಕಿಂಗ್ ವ್ಯವಹಾರಗಳನ್ನು ಶೆಡ್ಯೂಲ್ ಬ್ಯಾಂಕುಗಳ ರೀತಿಯಲ್ಲಿ ಖಾತೆಗಳ ವಿವರಗಳನ್ನು ಖಾತೆದಾರರ ಮನೆ ಬಾಗಿಲಿಗೆ ನೀಡಲಾಗುತ್ತಿದೆ.

ಫೆಡರೇಶನ್ ಅವಿಭಜಿತದ.ಕ ಮತ್ತುಉಡುಪಿ ಜಿಲ್ಲೆಯಲ್ಲಿ 85 ಸದಸ್ಯ ಸಹಕಾರಿ ಸಂಸ್ಥೆಗಳನ್ನು (1 ಲಕ್ಷಕ್ಕೂ ಮಿಕ್ಕಿ ಸದಸ್ಯರನ್ನೊಳಗೊಂಡ), ಸುಮಾರು 14000 ದಷ್ಟು ವೈಯಕ್ತಿಕ ಸದಸ್ಯರನ್ನು ಹೊಂದಿರುತ್ತದೆ.ದ.ಕ ಮತ್ತುಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಈ ಹಿಂದೆ ಹಲವು ವರ್ಷಗಳಿಂದ ನಷ್ಟದಲ್ಲಿದ್ದ ಸಂದರ್ಭದಲ್ಲಿ ಶ್ರೀ ಯಶ್ಪಾಲ್ ಸುವರ್ಣಅಧ್ಯಕ್ಷರಾಗಿ ಸಂಸ್ಥೆಯ ನೇತೃತ್ವ ವಹಿಸಿಕೊಂಡ ಬಳಿಕ ನಿರಂತರವಾಗಿ ಲಾಭ ಗಳಿಸುತ್ತ 10 ವರ್ಷಗಳಲ್ಲಿ ಸುಮಾರು 40 ಕೋಟಿ ಲಾಭವನ್ನು ದಾಖಲಿಸಿದೆ.

ಸಂಸ್ಥೆಯ ಲಾಭಾಂಶದಲ್ಲಿ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸಂಸ್ಥೆಯ ಸದಸ್ಯರಿಗೆಉಚಿತಆರೋಗ್ಯಕಾರ್ಡ್ ವಿತರಣೆ, ಅನಾರೋಗ್ಯ ಪೀಡಿತರಿಗೆಆರೋಗ್ಯ ನಿಧಿ ವಿತರಣೆ, ಸದಸ್ಯ ಸಹಕಾರಿ ಸಂಸ್ಥೆಗಳಿಗೆ ಮತ್ತುಗ್ರಾಹಕರಿಗೆ ಪ್ರೋತ್ಸಾಹಕ ಉಡುಗೊರೆಗಳನ್ನು ನೀಡುತ್ತಾ ಬಂದಿರುತ್ತದೆ.

ವಿಶಿಷ್ಟ ಕಾರ್ಯಚಟುವಟಿಕೆಯ ಮೂಲಕ ಸಂಸ್ಥೆಯನ್ನುಇನ್ನಷ್ಟು ಅಭಿವೃದ್ದಿಗೊಳಿಸುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಬ್ಯಾಂಕಿಂಗ್ ವ್ಯವಹಾರವನ್ನು ವಿಸ್ತರಿಸಿ ಹೊಸ ಶಾಖೆಗಳ ಆರಂಭ, ಮೀನುಗಾರರಅರ್ಥಿಕ ಸ್ವಾವಲಂಬನೆಗಾಗಿ ಸುಮಾರು 25 ಸಾವಿರ ಸದಸ್ಯರನ್ನೊಳಗೊಂಡ ಸ್ವಸಹಾಯ ಸಂಘಗಳ ರಚನೆಯ ಮೂಲಕ ಶೇಕಡ 2 ಬಡ್ಡಿದರದಲ್ಲಿ ಸಾಲವಿತರಣೆ, ಮೀನು ಸೇವನೆ ಪ್ರೋತ್ಸಾಹಿಸುವ ಹಾಗೂಗ್ರಾಹಕರಿಗೆತಾಜಾ ಮೀನು ಖಾದ್ಯಗಳನ್ನು ಒದಗಿಸುವ ನಿಟ್ಟಿನಲ್ಲಿರಾಜ್ಯಾದ್ಯಂತ ಮತ್ಸ್ಯಕ್ಯಾಂಟಿನ್ಆರಂಭ, ಮೀನು ಸಂಸ್ಕರಣಘಟಕ ಹಾಗೂ ಶಿತಲೀಕರಣ ಘಟಕ ಸ್ಥಾಪನೆ ಮುಂತಾದಯೋಜನೆ ನೂತನ ಆಡಳಿತ ಮಂಡಳಿಯ ಮುಂದಿದೆ.

ಪ್ರಸ್ತುತಮಹಾಲಕ್ಷ್ಮಿ ಕೋ. ಆಪರೇಟಿವ್ ಬ್ಯಾಂಕಿನಅಧ್ಯಕ್ಷರಾಗಿ, ನವಮಂಗಳುರು ಬಂದರು ಮಂಡಳಿಯ ಟ್ರಸ್ಟಿಯಾಗಿ, ಉಡುಪಿ ಜಿಲ್ಲಾ ಭಾರತೀಯಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವಯಶ್ಪಾಲ್ ಸುವರ್ಣತಮ್ಮ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿರುತ್ತಾರೆ.

ಫೆಡರೇಶನಿನ ಆಡಳಿತ ಮಂಡಳಿ ಸಭೆಯಲ್ಲಿ ನೂತನಉಪಾಧ್ಯಕ್ಷರಾಗಿಆಯ್ಕೆಯಾದ ಪುರುಷೋತ್ತಮ್ಅಮೀನ್ ಉಳ್ಳಾಲ, ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿಆಯ್ಕೆಯಾದ ಆನಂದ್ ಎ, ಸತೀಶ್ಆರ್ ಸಾಲ್ಯಾನ್, ರಾಮಚಂದ್ರಕುಂದರ್, ಶಿವಾಜಿ ಎಸ್ಅಮೀನ್, ದೇವಪ್ಪಕಾಂಚನ್, ಸುರೇಶ್ ಸಾಲ್ಯಾನ್, ಶ್ರೀ ರಾಮಕಾಂಚನ್, ಚಿದಾನಂದ, ಸುಧೀರ್ ಶ್ರೀಯಾನ್, ಉಷಾರಾಣಿ, ಸುಧಾಕರ್, ಬೇಬಿ ಎಚ್. ಸಾಲ್ಯಾನ್ ಮತ್ತು ಇಂದಿರಾಇವರು ಉಪಸ್ಥಿತರಿದ್ದರು.


Spread the love