ವಾಯುಭಾರ ಕುಸಿತ : ಮೀನುಗಾರಿಕಾ ದೋಣಿ ಮಾಲಕರಿಗೆ ಸೂಚನೆ

Spread the love

ವಾಯುಭಾರ ಕುಸಿತ : ಮೀನುಗಾರಿಕಾ ದೋಣಿ ಮಾಲಕರಿಗೆ ಸೂಚನೆ

ಉಡುಪಿ: ಅರಬ್ಬೀ ಸಮುದ್ರದಲ್ಲಿ ಅಕ್ಟೋಬರ್ 5ರ ಬಳಿಕೆ ತೀರ್ವ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿರುತ್ತದೆ. ಆದುದರಿಂದ ಎಲ್ಲಾ ಮೀನುಗಾರಿಕಾ ದೋಣಿ ಮಾಲಕರು ಮತ್ತು ಮೀನುಗಾರರು ಅಕ್ಟೋಬರ್ 5 ರಿಂದ 10 ರವರೆಗೆ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳದಂತೆ ಹಾಗೂ ಈಗಾಗಲೇ ಸಮುದ್ರದಲ್ಲಿರುವ ಮೀನುಗಾರರು ಕೂಡಲೇ ಬಂದರಿಗೆ ಹಿಂದಿರುಗಬೇಕೆಂದು ಮೀನುಗಾರಿಕೆ ಉಪನಿರ್ದೇಶಕರು, ಉಡುಪಿ ಇವರ ಪ್ರಕಟಣೆ ತಿಳಿಸಿದೆ.


Spread the love