ಶಾಸಕ ಭರತ್ ಶೆಟ್ಟಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ವಿಕಾಸ್ ಹೆಗ್ಡೆ ವ್ಯಂಗ್ಯ

Spread the love

ಶಾಸಕ ಭರತ್ ಶೆಟ್ಟಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ವಿಕಾಸ್ ಹೆಗ್ಡೆ ವ್ಯಂಗ್ಯ

ಕುಂದಾಪುರ: ಶಾಸಕ ಭರತ್ ಶೆಟ್ಟಿ ರಾಹುಲ್ ಗಾಂಧಿಯವರ ಕೆನ್ನೆಗೆ ಹೊಡೆಯಬೇಕು ಎಂದು ಹೇಳಿರುವುದು ಅವರ ಹಿಂಸಾ ಮನಸ್ಥಿತಿಯನ್ನು ಏತ್ತಿ ತೋರಿಸುತ್ತದೆ. ಮಾನಸಿಕ ಸ್ಥಮಿತ ಕಳೆದುಕೊಂಡಿರುವ ಭರತ್ ಶೆಟ್ಟಿಯವರು ಸೂಕ್ತ ವೈದ್ಯಕೀಯ ನೆರವು ಪಡೆದುಕೊಳ್ಳುವುದು ಸೂಕ್ತ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ವ್ಯಂಗ್ಯವಾಡಿದ್ದಾರೆ.

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಬಿಜೆಪಿಯವರದ್ದು ಹಿಂಸೆಯನ್ನು ಎತ್ತಿ ಹಿಡಿಯುವ ಹಿಂದುತ್ವ ಎಂದು ಹೇಳಿದ್ದನ್ನು ಬಿಜೆಪಿ ಶಾಸಕ ಭರತ್ ಶೆಟ್ಟಿ ರಾಹುಲ್ ಗಾಂಧಿ ಕೆನ್ನೆಗೆ ಹೊಡೆಯಬೇಕು ಎನ್ನುವ ಮೂಲಕ ಹಿಂಸೆ ಬಿಜೆಪಿಯವರ ಪರಮೋ ಧರ್ಮ ಎನ್ನುವುದನ್ನು ಪುರಾವೆ ಸಮೇತ ಸಾಬೀತು ಪಡಿಸಿದ್ದಾರೆ. ರಾಹುಲ್ ಗಾಂಧಿ ಇದನ್ನೇ ಹೇಳಿದ್ದು ಬಿಜೆಪಿಯವರದ್ದು ಹಿಂಸಾ ಪರಮೋ ಧರ್ಮ ಎಂದು. ಕಾಂಗ್ರೆಸ್ ನವರು ಮಹಾತ್ಮಾ ಗಾಂಧೀಜಿ ಅನುಯಾಯಿಗಳು ನಮ್ಮದು ಅಹಿಂಸೆಯೇ ಪರಮೋ ಧರ್ಮ, ಶಾಸಕ ಭರತ್ ಶೆಟ್ಟಿ ಮಾತು ಅವರ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ತೋರಿಸುತ್ತದೆ ಎಂದಿದ್ದಾರೆ.

ಎರಡು ಅವಧಿಗೆ ಶಾಸಕನಾಗಿರುವ ಅದರಲ್ಲೂ ವೃತ್ತಿಯಲ್ಲಿ ವೈದ್ಯನಾಗಿರುವ ಭರತ್ ಶೆಟ್ಟಿ ಸಾಮಾಜಿಕ ಜೀವನದಲ್ಲಿ ಇರಲು ಯೋಗ್ಯತೆ ಇರುವ ವ್ಯಕ್ತಿ ಅಲ್ಲಾ ಎಂದು ಪದೇ ಪದೇ ಅವರೇ ಸಾಬೀತು ಮಾಡುತ್ತಿದ್ದಾರೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ದಾರೆ.


Spread the love