ಶಿರ್ವದಲ್ಲಿ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ ಕನ್ನಡ ಸಂಘಟನೆ ನಾಯಕನಿಗೆ ಬಿತ್ತು ಗೂಸಾ

Spread the love

ಶಿರ್ವದಲ್ಲಿ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದ ಕನ್ನಡ ಸಂಘಟನೆ ನಾಯಕನಿಗೆ ಬಿತ್ತು ಗೂಸಾ

ಉಡುಪಿ: ವಿವಾಹಿತ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಕನ್ನಡ ಪರ ಸಂಘಟನೆಯ ನಾಯಕನೋರ್ವನಿಗೆ ಗೂಸಾ ನೀಡಿ ಪೋಲಿಸರಿಗೆ ಒಪ್ಪಿಸಿದ ಘಟನೆ ಶಿರ್ವ ಸಮೀಪದ ಪಂಜಿಮಾರ್ ಎಂಬಲ್ಲಿ ಶನಿವಾರ ನಡೆದಿದೆ.

ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದವನನ್ನು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಪಂಜಿಮಾರ್ ಎಂದು ಗುರುತಿಸಲಾಗಿದೆ.

ಕಳೆದ ಹಲವಾರು ದಿನಗಳಿಂದ ಪಂಜಿಮಾರಿನಲ್ಲಿ ಫ್ಯಾನ್ಸಿ ಸ್ಟೋರ್ ಒಂದನ್ನು ನಡೆಸುತ್ತಿರುವ ವಿವಾಹಿತ ಮಹಿಳೆಗೆ ಮೊಬೈಲ್ ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವುದಲ್ಲದೆ ಆಕೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.

ಶನಿವಾರವೂ ಕೂಡ ಮಹಿಳೆಗೆ ಕರೆ ಮಾಡಿದ ಸಂತೋಷ್ ಶೆಟ್ಟಿ ಹೋಟೆಲ್ ರೂಂ ಬುಕ್ ಮಾಡಿ ತನ್ನೊಂದಿಗೆ ಬರುವಂತೆ ಪೀಡಿಸಿದ್ದ ಎನ್ನಲಾಗಿದೆ. ಇದರ ಬಗ್ಗೆ ಮಹಿಳೆ ತನ್ನ ಪತಿಗೆ ತಿಳಿಸಿದ್ದು ಉಪಾಯವಾಗಿ ತನ್ನನ್ನು ಕರೆದುಕೊಂಡು ಹೋಗಲು ಅಂಗಡಿ ಬಳಿ ಬರುವಂತೆ ತಿಳಿಸಿ ಪತಿಯ ಸಹಾಯದಿಂದ ಪೋಲಿಸರಿಗೆ ಒಪ್ಪಿಸುವ ಪ್ಲ್ಯಾನ್ ಮಾಡಿದ್ದಳು. ಆಕೆಯನ್ನು ನಂಬಿ ಫ್ಯಾನ್ಸಿ ಸ್ಟೋರಿಗೆ ಬಂದಾಗ ಮಹಿಳೆ ಪತಿಯ ಸಮ್ಮುಖದಲ್ಲೇ ಗೂಸಾ ನೀಡಿದ್ದಲ್ಲದೆ ಪೋಲಿಸರಿಗೆ ಒಪ್ಪಿಸಿದ್ದಾಳೆ.

ಸ್ಥಳಕ್ಕೆ ಆಗಮಿಸಿದ ಶಿರ್ವ ಪೋಲಿಸರು ಆರೋಪಿಯನ್ನು ಬಂಧಿಸಿದ್ದಾರೆ.


Spread the love