ಸಚಿವರ ಪ್ರಮಾಣವಚನ ಕಾರ್ಯಕ್ರಮಕ್ಕೆ ರಾಜಭವನ ಪ್ರವೇಶಕ್ಕೆ ನಕಾರ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ

Spread the love

ಸಚಿವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ರಾಜಭವನ ಪ್ರವೇಶಕ್ಕೆ ನಕಾರ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ

ಬೆಂಗಳೂರು: ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಿಮಿತ್ತ ರಾಜಭವನ ಪ್ರವೇಶಕ್ಕೆ ಅವಕಾಶ ಸಿಗದಿದ್ದಕ್ಕೆ ಸಭಾಧ್ಯಕ್ಷ ಕೆ. ಆರ್​. ರಮೇಶ್​ಕುಮಾರ್​ ಅವರು ಅಸಮಾಧಾನ ವ್ಯಕ್ತಪಡಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾಗೆ ಅವರಿಗೆ ಪತ್ರ ರವಾನಿಸಿರುವ ಸಭಾಧ್ಯಕ್ಷರು ಆಹ್ವಾನದ ಮೇರೆಗೆ ಸಚಿವರ ಪ್ರಮಾಣವಚನಕ್ಕೆ ಆಗಮಿಸಿದ್ದೆ. 30 ನಿಮಿಷ ಕಾದರೂ ರಾಜಭವನದೊಳಗೆ ಪ್ರವೇಶ ಸಿಗಲಿಲ್ಲ. ಇಂತಹ ಅವ್ಯವಸ್ಥೆಗೆ ಯಾರು ಕಾರಣ? ಎಂದು ಕಿಡಿಕಾರಿದರು.

ಗೌರವಯುತ ಹುದ್ದೆಯಲ್ಲಿರುವ ನನಗೆ ಕೆಟ್ಟ ಅನುಭವವಾಯ್ತು. ಅಧಿಕಾರಿಶಾಹಿ ದುರ್ವರ್ತನೆಯಿಂದ ಬೇಸರವಾಗಿದೆ. ರಾಜಭವನದ ಒಳಗೂ, ಹೊರಗೂ ಇದ್ದ ಕಾರುಗಳು ಯಾರದು? ಆ ಕಾರುಗಳಿಗೆ ಅನುಮತಿ ಕೊಟ್ಟಿದ್ದು ಯಾರು? ಸ್ಪೀಕರ್​​, ಸಭಾಪತಿ ಹುದ್ದೆಗಳಿಗೆ ಮಾತ್ರ ಗೌರವ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Spread the love