ಸುಳ್ಯ | ಬಸ್‌ನಲ್ಲೇ ನಿರ್ವಾಹಕನಿಗೆ ಹೃದಯಾಘಾತ

Spread the love

ಸುಳ್ಯ | ಬಸ್‌ನಲ್ಲೇ ನಿರ್ವಾಹಕನಿಗೆ ಹೃದಯಾಘಾತ
 
ಸುಳ್ಯ: ಆಲೆಟ್ಟಿ ಗ್ರಾಮದ ಕುಂಚಡ್ಕ ನಿವಾಸಿ ನಾರಾಯಣ ಬೆಳ್ಚಪ್ಪಾಡ ಅವರ ಪುತ್ರ ಖಾಸಗಿ ಬಸ್ ನಿರ್ವಾಹಕ ಗುರುಪ್ರಸಾದ್ ಕುಂಚಡ್ಕ (32) ಹೃದಯಾಘಾತದಿಂದ ಸೋಮವಾರ ನಿಧನರಾದರು.

ಬೆಳಗ್ಗೆ ಸುಳ್ಯದಿಂದ ತೊಡಿಕಾನಕ್ಕೆ ಬಸ್‌ನಲ್ಲಿ ಹೋಗುತ್ತಿರುವಾಗ ಅಡ್ಯಡ್ಕ ತಲುಪುತ್ತಿದ್ದಂತೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತು.

ತಕ್ಷಣ ಬಸ್‌ ಚಾಲಕ ಹಾಗೂ ಸ್ಥಳೀಯರು ಸೇರಿ ಆಟೊರಿಕ್ಷಾದಲ್ಲಿ ಸುಳ್ಯಕ್ಕೆ ಕರೆ ತಂದರು. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಅವರು ಮೃತ ಪಟ್ಟಿದ್ದಾರೆ. ಅವರಿಗೆ ತಾಯಿ, ಪತ್ನಿ, ಗಂಡು ಮಗು ಇದ್ದಾರೆ.


Spread the love
Subscribe
Notify of

0 Comments
Inline Feedbacks
View all comments